ಮಂಗಳೂರು: ಇತ್ತೀಚೆಗೆ ಬಂಟ್ವಾಳ, ಪುತ್ತೂರು ಮತ್ತು ಮಂಜೇಶ್ವರದಿಂದ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬಂಧಿಸಿರುವ ನಿಷೇಧಿತ ಪಿಎಫ್ಐ ಸಂಘಟನೆಗೆ ಸೇರಿದ ಐವರು ಆರೋಪಿಗಳು ಭಯೋತ್ಪಾದಕರಿಗೆ 25 ಕೋಟಿ ರು. ವರ್ಗಾವಣೆ ಮಾಡಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಪಿಎಫ್ಐ ನಿಷೇಧದ ಬಳಿಕ ಬಿಹಾರದ ಪುಲ್ವಾರಿ ಶರೀಫ್ ಮತ್ತು ಮೋತಿಹಾರಿಯಲ್ಲಿನ ಪಿಎಫ್ಐ ಕಾರ್ಯಕರ್ತರು ಬಿಹಾರದಲ್ಲಿ ಗುಪ್ತ ರೀತಿಯಲ್ಲಿ ಪಿಎಫ್ಐ ಚಟುವಟಿಕೆ ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಈ ಭಯೋತ್ಪಾದನಾ ಚಟುವಟಿಕೆ ತನಿಖೆ ವೇಳೆ ಹವಾಲಾ ಮೂಲಕ ಹಣ ಸಂದಾಯ ಆಗಿದ್ದು ಎನ್ಐಎಗೆ ಗೊತ್ತಾಗಿದ್ದು, ಇದರ ಹಿಡಿದು ಹೊಟ ಎನ್ ಐ ಎ ಅಧಿಕಾರಿಗಳ ತಂಡ ದ.ಕ. ಮತ್ತು ಮಂಜೇಶ್ವರದಲ್ಲಿ ದಾಳಿ ನಡೆಸಿದ್ದ ಐವರನ್ನು ಬಂಧಿಸಿತ್ತು. ಈ ವೇಳೆ ಕೋಟ್ಯಂತರ ರು. ವ್ಯವಹಾರ ನಡೆದಿರುವ ದಾಖಲೆಗಳನ್ನೂ ಎನ್ ಐ ಎ ವಶಪಡಿಸಿಕೊಂಡಿತ್ತು.
ಪಿಎಫ್ಐನ ಭಯೋತ್ಪಾದನಾ ಚಟುವಟಿಕೆಗೆ ಗಲ್ಫ್ ರಾಷ್ಟ್ರದಿಂದ ಹವಾಲಾ ಮೂಲಕ ಹಣ ರವಾನೆಯಾಗುತ್ತಿದ್ದು ಈ ಹಣ ಆರೋಪಿ ಇಕ್ಬಾಲ್ ಗೆ ಸೇರುತ್ತಿತ್ತು. ಬಳಿಕ ಆತ ಅದನ್ನು ಇತರ ಆರೋಪಿಗಳಿಗೆ ಹಂಚುತ್ತಿದ್ದ. ಇವರಲ್ಲಿ ಸಫ್ರ್ರಾಜ್ ನವಾಜ್ ಮತ್ತು ಮೊಹಮ್ಮದ್ ಸಿನಾನ್ ಮೂಲಕ ಹೆಚ್ಚು ಹಣ ರವಾನೆಯಾಗಿರುವುದು ಕಂಡುಬಂದಿದೆ. ಸುಮಾರು 25 ಕೋಟಿ ರು.ಗಳಷ್ಟುಬೃಹತ್ ಮೊತ್ತ ರವಾನಿಸಿದ್ದಾರೆ ಎನ್ನುವುದನ್ನು ವಿಚಾರಣೆ ವೇಳೆ ತಿಳಿದು ಬಂದಿದೆ.