ನವದೆಹಲಿ: ದೇಶದ್ರೋಹದ ಅಪರಾಧೀಕರಿಸುವ ಐಪಿಸಿಯ ಸೆಕ್ಷನ್ 124 ಎ ನಿಬಂಧನೆಗಳನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡಿದೆ. ಮರುಪರಿಶೀಲನೆ ಪೂರ್ಣಗೊಳ್ಳುವವರೆಗೆ 124ಎ ಅಡಿಯಲ್ಲಿ ಯಾವುದೇ ಪ್ರಕರಣ ದಾಖಲಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.
Sedition Law | Supreme Court allows the Central government to re-examine and reconsider the provisions of Section 124A of the IPC which criminalises the offence of sedition. Supreme Court says till the exercise of re-examination is complete, no case will be registered under 124A. pic.twitter.com/xrjHNyLbA6
— ANI (@ANI) May 11, 2022
ಮರುಪರಿಶೀಲನೆ ಮುಗಿಯುವವರೆಗೆ ಕಾನೂನಿನ ಈ ನಿಬಂಧನೆಯನ್ನು ಬಳಸದಿರುವುದು ಸೂಕ್ತವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯಗಳು ಸೆಕ್ಷನ್ 124 ಎ ಅಡಿಯಲ್ಲಿ ಯಾವುದೇ ಎಫ್ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸುವುದನ್ನು ಅಥವಾ ಮರು ಪರೀಕ್ಷೆ ಮುಗಿಯುವವರೆಗೆ ಅದರ ಅಡಿಯಲ್ಲಿ ವಿಚಾರಣೆಯನ್ನು ಪ್ರಾರಂಭಿಸುವುದಿಲ್ಲ ಎಂದು ನಾವು ಭಾವಿಸುತ್ತೇವೆ ಮತ್ತು ನಿರೀಕ್ಷಿಸುತ್ತೇವೆ, ”ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠ ಹೇಳಿದೆ.
ನಾಗರಿಕ ಸ್ವಾತಂತ್ರ್ಯವನ್ನು ಕಾಪಾಡುವ ಅಗತ್ಯವನ್ನು ಒತ್ತಿಹೇಳುವ ಸಂದರ್ಭದಲ್ಲಿ 152 ವರ್ಷಗಳಷ್ಟು ಹಳೆಯದಾದ ವಸಾಹತುಶಾಹಿ ಯುಗದ ದೇಶದ್ರೋಹದ ಶಿಕ್ಷೆಯ ನಿಬಂಧನೆಯನ್ನು ಸುಪ್ರೀಂ ಕೋರ್ಟ್ ಬುಧವಾರ ತಡೆಹಿಡಿದಿದೆ. ಸರ್ಕಾರವು ಕಾನೂನನ್ನು ಪರಿಶೀಲಿಸುವವರೆಗೆ ಬಂಧನಗಳಿಂದ “ಜನರನ್ನು ರಕ್ಷಿಸಲು” ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 124A ಅನ್ನು ತಡೆಹಿಡಿಯಬಹುದೇ ಎಂದು ನಿರ್ಧರಿಸಲು ನ್ಯಾಯಾಲಯವು ಕೇಂದ್ರಕ್ಕೆ 24 ಗಂಟೆಗಳ ಗಡುವನ್ನು ನಿಗದಿಪಡಿಸಿದ ಒಂದು ದಿನದ ನಂತರ ಇದು ನಡೆದಿದೆ.
ದಂಡದ ನಿಬಂಧನೆಯಡಿಯಲ್ಲಿ ಜೈಲಿನಲ್ಲಿರುವವರು ಅಥವಾ ವಿಚಾರಣೆಗೆ ಒಳಗಾದವರು ತಮ್ಮ ಕುಂದುಕೊರತೆಗಳನ್ನು ತ್ವರಿತವಾಗಿ ನಿರ್ಣಯಿಸಲು ವಿಚಾರಣಾ ನ್ಯಾಯಾಲಯಗಳನ್ನು ಸಂಪರ್ಕಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಕಾನೂನಿನ ದುರುಪಯೋಗವನ್ನು ಪರಿಶೀಲಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (UTs) ಹೆಚ್ಚುವರಿ ಮಾರ್ಗಸೂಚಿಗಳನ್ನು ನೀಡಲು ಕೇಂದ್ರವು ಸ್ವತಂತ್ರವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಸೆಕ್ಷನ್ 124A ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಪ್ರಸ್ತುತ ಸುಪ್ರೀಂಕೋರ್ಟ್ಗೆ ಏಳು ಅರ್ಜಿಗಳನ್ನು ಸಲ್ಲಿಸಲಾಗಿದೆ.ಮುಕ್ತ ಅಭಿವ್ಯಕ್ತಿಯನ್ನು ಬಗ್ಗುಬಡಿಯಲು ಬ್ರಿಟಿಷರು ಬಳಸಿದ ವಸಾಹತುಶಾಹಿ ಅವಧಿಯ ಕಾನೂನನ್ನು ಈ ಹಿಂದೆಯೂ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. 1962ರಲ್ಲಿ, ಕೇದಾರ ನಾಥ್ ಸಿಂಗ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ದೇಶದ್ರೋಹ ಸೆಕ್ಷನ್ ಅನ್ನು ಎತ್ತಿ ಹಿಡಿದಿತ್ತು.
“ಸೆಕ್ಷನ್ 124ಎ ಯ ಕಠಿಣತೆಗಳು ಪ್ರಸ್ತುತ ಪರಿಸ್ಥಿತಿಗೆ ಹೊಂದಿಕೆಯಾಗುವುದಿಲ್ಲ ಮತ್ತು ಇದು ದೇಶದ ವಸಾಹತುಶಾಹಿ ಕಾನೂನಿನಡಿಯಲ್ಲಿದ್ದ ಸಮಯಕ್ಕೆ ಉದ್ದೇಶಿಸಲಾಗಿತ್ತು ಎಂದು ಕೇಂದ್ರವು ಒಪ್ಪುತ್ತದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ, ಕೇಂದ್ರವು ಅದನ್ನು ಮರುಪರಿಶೀಲಿಸಬಹುದು” ಎಂದು ಕೋರ್ಟ್ ಹೇಳಿದೆ.